Saturday, October 25, 2014

ಮುಳ್ಳು...


ತೀರದ ನೌಕೆಗೆ ಕೈ ಚಾಚಿದೇ ಮನ
ನಿಲುಕದ ಪ್ರೀತಿಗೆ ಕಾತರಿಸಿದೇ ದಿನ..
ನಿತ್ಯ ಜಂಜಡದಲಿ ಸವೆಯುವ ಹೃದಯದಲಿ
ನಿನಗಾಗಿ ಗೆಳೆಯನೆ ಹೃನ್ಮನದ ಪೂಜನ....
 
ಎಷ್ಟು ನಾದಿದರೂ ನಾ ಕಟ್ಟಬಲ್ಲೆನೇ ಮರಳ ಗೂಡ
ಪ್ರತಿಷ್ಟಾಪಿಸಬಲ್ಲೆನೇ ಅದರೊಳಗೆ ಶಿವಲಿಂಗವ..
ನೆರವೇರದಾ ಅಭೀಷ್ಟದ ಸಿದ್ಧಿಗಾಗಿ
ಮೌಢ್ಯದ ಕೂಪದಿಂದ ಬಸೆದ ಕಣ್ಣೀರ ಅಭಿಷೇಕ
ದೈತ್ಯ ಮುಳ್ಳುಗಳಿಟ್ಟ ಮುಹೂರ್ತ, ಅವೇ ಸುತ್ತಮುತ್ತ....
 
ನೂರಾರು ಸಹಚರರು ಈ ಬಾಳ ಸಂತೆಯಲ್ಲಿ
ಕಡಲ ಪಥದಲ್ಲಿ ಒಂಟಿ ನಾನು ಪ್ರತಿ ಈಜಿನಲ್ಲಿ
ಕೈ ಹಿಡಿಯದ ದೂರ್ತರು ಮುಳುಗಿನಲ್ಲೂ..
ಕ್ರಮಿಸಲಾಗದ ಹೆಜ್ಜೆಗಳ ಸಂಕಲನ..
ನೆಲಕಚ್ಚಿದರೆ ಯಾರೂಬರರಿಲ್ಲಿ ಉಸಿರ ಭರಿಸಲು.....
 
ಬಿದ್ದರೆ ನೆಟಿಗೆ ಮುರಿವರು
ಹಾಳಾಗೆನುತ ಮೂತಿ ತಿರುವುವರು
ಸಾಲಾಗಿ ಹಲ್ಲುಮಸೆಯುತ್ತಾ ಕಾಗೆಗಳು ಪಿಂಡ ನುಂಗಲು..
ಸಾಕಿನ್ನು ಈ ಹೋರಾಟ, ಹುಸಿನಗೆಯ ತುಚ್ಛ ಜನ್ಮ,
ಕೊಳ್ಳಿಯಿಡು ಬೇಗ, ಮುಕ್ತಿ ಕೊಟ್ಟುಬಿಡು....

1 comment:

Badarinath Palavalli said...

ಬದುಕಿನ ಕೆಲವು ಕಹಿ ಘಟ್ಟಗಳಲೊಮ್ಮೆ ಮನಸು ಹೀಗೇ ನೊಂದುಕೊಳ್ಳುತ್ತದೆ.
ಕಾಯಬೇಕಷ್ಟೇ ಸುಮೂರ್ತಕ್ಕಾಗಿ!

shared at:
https://www.facebook.com/groups/191375717613653?view=permalink&id=435285689889320