ಮೈತುಂಬಿ ಜಲಲೆಯು
ವೈಯ್ಯಾರದಿ ನಡೆದಿಹಳು
ಕುಲಕುತ್ತಾ, ಬಳುಕುತ್ತಾ
ಹಾವಂತೆ.....
ಯಾರ ಹಂಗಿಲ್ಲದೇ
ಉಸಿರಾಗಿ ಪೊರೆವಳು
ಕೋಟಿ ಜನುಮವನೂ
ತಾಯಂತೆ.....
ಸಹ್ಯಾದ್ರಿಯಿಂದ ಇವಳ
ಕಾಡಿ ಬೇಡಿಯಾದರೂ
ನನ್ನಂಗಳಕೆ ತರುವಾಸೆ
ಭಗೀರಥನಂತೆ.....
ಯಾವ ದೇವರೋ
ಏನವನ ಸೃಷ್ಟಿಯೋ
ಸರಿಸಾಟಿ ಬೇರಿಲ್ಲ ಈ
ಅಮೃತಧಾರೆಯಂತೆ....
4 comments:
ತುಂಬ ಚೆನ್ನಾಗಿದೆ.. ನೀವು ಬ್ಲಾಗ್ ಪ್ರಾರಂಭಿಸಿದ್ದು ಸಂತೋಷ... ಶುಭವಾಗಲಿ..
ಬೇಂದ್ರೆ ಅಜ್ಜ 'ಇಳಿದು ಬಾ ತಾಯೇ' ಎಂದು ಪ್ತಾರ್ಥಿಸಿದಂತೆ, ತಮ್ಮ ಈ ಕವನವು ಗಂಗಾವತರಣವನ್ನು ಹನಿ ಹನಿಯಾಗಿ ಉಪಾಸನೆ ಮಾಡುತ್ತಿದೆ.
ಬಹಳ ಧನ್ಯವಾದಗಳು ಶಿವಾನಂದ sir..
ಬಹಳ ಧನ್ಯವಾದಗಳು ಬದರಿ sir..
Post a Comment